ಕೊರೊನಾ ಕುರಿತು ತಾಂಡಾಗಳ ಜಗೃತಿ

ಕೊರೊನಾ ಕುರಿತು ತಾಂಡಾಗಳ ಜಗೃತಿ

ಬಳ್ಳಾರಿ ಜಿಲ್ಲಾ, ಹೂವಿನ ಹಡಗಲಿ ತಾಲೂಕಿನ, ಮುದ್ಲಾಪುರ ಹೊಸ ತಾಂಡದಲ್ಲಿ ಕೊರೊನ ವೈರಸ್ ನ ಕುರಿತಾಗಿ ತಾಂಡದಲ್ಲಿ ಅನುಸರಿಸಬೇಕಾದ ಕ್ರಮಗಳಾ ಕುರಿತಾಗಿ ಇಂದು ತುರ್ತಾಗಿ ದೈವಸ್ತರು ಪಂಚಾಯಿತಿ ಮಾಡಿ, ಕೆಲವೊಂದು ಕಠಿಣ ಕ್ರಮಗಳನ್ನ ಕೈಗೊಂಡಿದ್ದಾರೆ.

👉    *ಪ್ರಮುಖವಾಗಿ ಒಂದು ತಿಂಗಳು ತಾಂಡ ಬಂದ್ ಮಾಡುವುದು...*
👉    *ತಾಂಡದಲ್ಲಿ ಇರುವ ಸಾರಾಯಿ, ಕಿರಾಣಿ, ಹೋಟೆಲ್ ಗಳನ್ನ ಮುಚ್ಚುವುದು....*
👉    *12 ಜನರ ಯುವಕರ ತಂಡ ರಚಿಸಿದ್ದು ಬೇರೆ ಊರುಗಳಿಂದ ಬರುವಂತ ಜನರನ್ನ ತಾಂಡದೊಳಗೆ ಪ್ರವೇಶಿಸದಂತೆ ತಡೆಯೋದು....*
👉     *ದುಡಿಯಲಿಕ್ಕೆ ಅಂತ ಬೆಂಗಳೂರು, ಮಂಗಳೂರು ಮತ್ತು ಗೋವಾಕ್ಕೆ ಹೋಗಿರುವವರು ಯಾರಾದ್ರೂ ವಾಪಸ್ ಊರಿಗೆ ಬಂದ್ರೆ ಅಂತವರನ್ನ ತಡೆದು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸುವುದು....*
👉   *ಗುಂಪಾಗಿ ಯಾರು ಕೂಡ ನಿಲ್ಲಬಾರ್ದು ಜೊತೆಗೆ ರಸ್ತೆಗಳಲ್ಲಿ ಓಡಾಡಬಾರದು...*
👉    *ಯಾವುದೇ ಕಾರ್ಯಕ್ರಮಗಳನ್ನ ಮಾಡುವ ಹಾಗಿಲ್ಲ ಜೊತೆಗೆ ಹಬ್ಬವನ್ನ ಮಾಡುವ ಹಾಗಿಲ್ಲಾ....*

       ಈ ಮೇಲಿನಂತೆ ಪ್ರಮುಖ ನಿಯಮಗಳನ್ನ ದೈವಸ್ತರೇ ನಿರ್ಣಯ ಮಾಡಿದ್ದು, ತಾಂಡಾದ ಜನತೆ ಚಾಚು ತಪ್ಪದೆ ಪಾಲಿಸಲು ತಾಂಡಾದ ಜನತೆಗೆ ಆದೇಶಿಸಲಾಗಿದೆ. ಇದರಂತೆ ಜನರು ಸಹ ಈ ಎಲ್ಲ ಅದೇಶಗಳನ್ನ ಪಾಲಿಸಲು ಒಪ್ಪಿದ್ದು ಈಗಾಗಲೇ ಆದೇಶದಂತೆ ಪಾಲಿಸುತ್ತಿದ್ದಾರೆ.

    ಹೀಗೆ ಎಲ್ಲಾ ತಾಂಡಗಳಲ್ಲಿ ಮಾಡಿದರೆ ತುಂಬಾ ಉತ್ತಮ...

     *ಇದರಿಂದ ನಾವು ನಮ್ಮ ಜೀವ ಮತ್ತು ಕುಟುಂಬವನ್ನು ರಕ್ಷಿಸಿಕೊಳ್ಳೋಣ...*

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ